I ಸಮಾಜಮುಖಿ I ಬಸವರಾಜ್ ಕೊರವರ್ I ಕೊಲೆಗೆ ಸಂಚು I
ಧಾರವಾಡ : ಸಾಮಾಜಿಕ ಹೋರಾಟಗಾರ ಬಸವರಾಜ ಕೊರವರ ಕೊಲೆಗೆ ಸಂಚು ನಡೆದಿದೆ ಎಂಬ ಮಾಹಿತಿ ಗುಪ್ತಚರ ಇಲಾಖೆಯಿಂದ ಹೊರ ಬಿದ್ದಿದೆ,, ನಿಖರ ಮಾಹಿತಿಯಂತೆ ಧಾರವಾಡ ಜಿಲ್ಲೆಯಲ್ಲಿ ಪೊಲೀಸರು ತೀವ್ರ ಕಟ್ಟೇಚ್ಚರ ವಹಿಸಿದ್ದಾರೆಂದು ತಿಳಿದು ಬಂದಿದೆ.
ಜಿಪಂ ಸದಸ್ಯ ಯೋಗಿಶ್ ಸುಫಾರಿ ಕೊಲೆ ಹತ್ಯೆ ಸೇರಿದಂತೆ ಹಲವು ಪ್ರಮುಖ ಪ್ರಕರಣಗಳನ್ನ ಹೊರಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬಸವರಾಜ ಕೊರವರ್ ಅವರು, ಜನಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿರುವುದನ್ನ ಬಹುತೇಕರು ಗುರುತಿಸಿದ್ದಾರೆ.
ಬಡವರ ಮಗನೆಂದೆ ಖ್ಯಾತಿ ಪಡೆದಿರುವ ಬಸವರಾಜ ಕೊರವರ್ ಅವರನ್ನ ಕೊಲೆ ಮಾಡಲು ಸಂಚು ರೂಪಿಸಿರುವ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ಬಂದಿದೆ. ಈ ಕುರಿತು ಬಸವರಾಜ ಕೊರವರ್ ಅವರಿಂದಲೂ ವಿಚಾರಣೆ ಮೂಲಕ ಸುಳಿವುಗಳನ್ನು ಕಲೆ ಹಾಕಲಾಗಿದೆ ಎನ್ನುವ ವಾಸ್ತವ ಸುದ್ದಿಗಳಿದೆ,
ಬಸವರಾಜ ಕೊರವರ್ ಅವರ ಕೊಲೆಯ ಸಂಚಿನ ನಿಖರತೆಯನ್ನ ಪೊಲೀಸರು ಪತ್ತೆ ಮಾಡಲು ಮುಂದಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಗಂಭೀರವಾಗಿ ಪರಿಗಣಿಸಿ ವಿಚಾರಣೆ ನಡೆಸುತ್ತಿರುವುದು ಸಧ್ಯದ ಸ್ಥಿತಿ ಆಗಿದೆ,
ಒಟ್ಟಿನಲ್ಲಿ ಸಾಮಾಜಿಕ ನ್ಯಾಯ ಎನ್ನುವುದು ರಾಜ್ಯದಲ್ಲಿ ಮರಿಚಿಕೆ ಆದಂತಿದೆ, ಈ ಕೂಡಲೇ ಗೃಹ ಇಲಾಖೆ ತ್ವರಿತಗತಿಯಲ್ಲಿ ಪತ್ತೆ ಹಚ್ಚಬೇಕು, ಹಾಗೂ ಸಮಾಜಮುಖಿ ಹೋರಾಟಗಾರ ಬಸವರಾಜ್ ಕೊರವರ್ ಅವರಿಗೆ ಅವರ ಕುಟುಂಬ ವರ್ಗದವರಿಗೆ ಸೂಕ್ತ ರಕ್ಷಣೆ ಒದಗಿಸುವಂತೆ ಸೂರ್ಯಗಗನ ಈ ಮೂಲಕ ಒತ್ತಾಯಿಸುತ್ತದೆ.


