I ಶಿವಮೊಗ್ಗದ ಅಂಬಿಕಾ ಸ್ಟೋರ್ ಮಾಲೀಕನ ಕಿಡ್ನಪ್ ಮತ್ತು ಕೊಲೆ ಪ್ರಕರಣ I ಇದೀಗ ಮತ್ತೆ ಮುನ್ನೆಲೆಗೆ!! I
ಶಿವಮೊಗ್ಗ : ಕೋಟೆ ಪೊಲೀಸ್ ಠಾಣೆಯ ಗುನ್ನೆ ನಂ 120/2003 ಕೊಲೆ ಪ್ರಕರಣದಲ್ಲಿ ಆರೋಪಿಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ಪೊಲೀಸರು ಸಿ ರಿಪೋರ್ಟ್ ಸಲ್ಲಿಸಿದ್ದಾರೆ.
ಈ ಪ್ರಕರಣದ ಜಾಡು ಹಿಡಿದು, ತನಿಖೆಯ ಸಮಯದಲ್ಲಿ ಸಾಕಷ್ಟು ಅನುಮಾನ ಗಳು ಕಂಡುಬಂದಿವೆ. ನಿಜವಾದ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಪೊಲೀಸರು ತನಿಖಾಧಿಕಾರಿಗಳು ವಿಫಲವಾಗಿದ್ದಾರೆ ಇದೋಂದು ಕುವೆಂಪು ರಸ್ತೆಯಲ್ಲಿ ಕಾರಿನಲ್ಲಿ ಕಿಡ್ನಪ್ ಮಾಡಿ ನಂತರ ಭೀಕರವಾಗಿ ಕೊಲೆ ಮಾಡಲಾಗಿತ್ತು, ಈ ಪ್ರಕರಣದಲ್ಲಿ ಆರೋಪಿ ಗಳು ಪತ್ತೆಯಾಗಿಲ್ಲ ಎಂದು ಆರೋಪಗಳನ್ನು ಮಾಡಿ ಸೂಕ್ತವಾದ ಎಲ್ಲಾ ದಾಖಲಾತಿಗಳೋಂಧಿಗೆ ಕೊಲೆಯ ಪ್ರಕರಣದ ಮರು ತನಿಖೆಗೆ CBI ಗೆ ಅಥವಾ CID ಗೆ ಕೊಡಬೇಕೆಂದು ಆಗ್ರಹಿಸಿ ಡಿ.ಜಿ.ನಾಗರಾಜ್ ಸಂಪಾದಕರು ಹಲೋ ಶಿವಮೊಗ್ಗ ದಿನಪತ್ರಿಕೆ ಇವರು ಪೋಲಿಸ್ ಇಲಾಖೆಯ ದೂರು ಪ್ರಾಧಿಕಾರಕ್ಕೆ ಪತ್ರಬರೆದು ಒತ್ತಾಯಿಸಿದ್ದರು.
ಇದೀಗ ಎಸ್ಪಿ ಶಿವಮೊಗ್ಗ ಮತ್ತು ಜಿಲ್ಲಾಧಿಕಾರಿಗಳು ಈ ಪ್ತಕರಣದ ಗಂಭೀರತೆಯನ್ನು ಪರಿಗಣಿಸಿ, ಈ ಪ್ರಕರಣವನ್ನು ಮುಂದಿನ ಕ್ತಮಕ್ಕಾಗಿ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುತ್ತಾರೆ. ಈ ಪತ್ರದ ಒಂದು ಪ್ರತಿಯೊಂದು ಕೂಡ ದೂರುದಾರ ಡಿ.ಜಿ.ನಾಗರಾಜ್ ಇವರಿಗೆ ತಲುಪಿದೆ.
ಸದ್ಯದಲ್ಲಿಯೇ ಈ ಕೊಲೆ ಪ್ರಕರಣದ ತನಿಖೆಯನ್ನು CBI ಗೆ ಅಥವಾ COD ಗೆ ವಹಿಸುವ ಎಲ್ಲಾ ಸಾದ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಪ್ರಕರಣದಲ್ಲಿ ದಿನ ಪತ್ರಿಕೆಯ ಸಂಪಾದಕನೋರ್ವನ ಹೆಸರನ್ನು ಕೂಡ ತನಿಖಾಧಿಕಾರಿಗಳು ತನಿಖೆಯ ಸಮಯದಲ್ಲಿ ನಮೂದಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇದೀಗ ಆರೋಪಿಗಳಲ್ಲಿ ನಡುಕ ಶುರುವಾಗಿದೆ.
ಸರ್ಕಾರದ ಪ್ರಧಾನ ಕಾರ್ಯದರ್ಶಿ ಗಳು ಯಾವ ಕ್ರಮಕ್ಕೆ ಮುಂದಾಗುತ್ತಾರೆ ಎಂಬುದನ್ನು ನಾವೆಲ್ಲರೂ ಕಾದು ನೋಡಬೇಕಿದೆ.

