ಬರೆಯುತ್ತಾರೆ ಗಾರಾ.ಶ್ರೀನಿವಾಸ್
I ಮನುಷ್ಯ ಮುಖಿ I
ಹೇ ಮನುಷ್ಯ ಮುಖಿಯೇ.
ಬಿಸಿ ನೆತ್ತರು, ಭೂ ದಾಹ ತೀರಲಿಲ್ಲವೇ..?!
ಇಟ್ಟ ನಂಬಿಕೆಯ ಬುತ್ತಿಗೆ ವಿಷವಿಟ್ಟಿರೇಕೆ..?
ಯಾರಿಗಾಗಿ ಇಂತಿವುಗಳೆಲ್ಲಾ..?!
ಪಾಪಿ ದೊರೆ ಎಂದೆನಿಸುವಿಕೆಯೇ,
ಗತ ಕಾಲದಿ ಕೋಟೆ ಕಟ್ಟಿ ಆಳಿದವರು,
ಅಳಿದು ಹೋದ ಇತಿಹಾಸವೊಮ್ಮೆ ತಿರುವಿ,
ನಿವ್ಯಾವ ಲೆಕ್ಕ, ಎಲಿಮೆಂಟರಿ ಸ್ಟೋರೇಜ್ಗಳೇ,
ಕೋಟಿ ಕಂತೆಗಳಿಟ್ಟು, ಹಸಿ ದ್ರೋಹ ಬಗೆದು,
ರಕ್ಕಸ ರೂಪಿ ನಡೆಗೆ, ಬರಹವೇ ಉತ್ತರಿಸುವುದು,
ಕಾದು ನೋಡಿ, ಮನುಷ್ಯಮುಖಿ ಚಿತ್ರಣವಾ..
ಬರೆಯುತ್ತಾರೆ ಗಾರಾ.ಶ್ರೀನಿವಾಸ್,
ಉರುಳಿ ಬಿದ್ದ ಹೆಣಗಳ ಮ್ಯಾಲೆ ನಿಂತಿದೆ
ಶಿವಮೊಗ್ಗದ ಕ್ರೂರತ್ವದ ಕ್ರೌರ್ಯ ಸಾಮ್ರಾಜ್ಯ,
ಪರಿ ಪರಿ, ಕೆಣಕಿ ಶೋಷಣೆಗೈದು ಬಿಟ್ರಿ,
ನಿನ್ನ ಕಪಟ ರಾಜಕೀಯ ನಾಶ ಎನ್ನಿಂದಲೇ,
ಈ ಬರಹದ ಮೇಲಾಣೆ, ನಾ ಯಾರು ಗೊತ್ತೇ,
ಲಂಕೆಯ ಸುಡುವಂತೆ ಸುಡುವ ಹನುಮನ ಒಡನಾಡಿ
ಅಘೋರಿಗಳ ಕಟ್ಟಿದ ಆಶೀರ್ವಾದದ ಎದೆಕವಚವಿದು,
ಅವಕಾಶ ಕೊಟ್ಟಿದ್ದೇನೆ, ವಾಮಮಾರ್ಗಗಳು, ಕಪಟಗಳು,
ಕುತಂತ್ರಗಳು, ಎನ್ನದೊಂದು ಸನ್ನೆಗೆ ಇನ್ನೂ ಮೈದಡವಿಲ್ಲ,
ಹಾಳು ದಿನಮಾನದೊಳು ಕಂಗಲಾಗಿ ಕೆಂಗಡದಿರು,
ಇಂದೇ ಮನುಷ್ಯರೂಪಿ ಕ್ರೌರ್ಯ ಮೃಗಿಯ ತ್ಯಜಿಸಿಬಿಡು,
ಕಾಡ, ಕಣಿವೆಗಳಾದರೇನು, ಬೋರ್ಗರೆವ ಕಡಲಾದರೇನು,
ನಿನ್ನ ಅವಕಾಶದ ಶೋಷಣೆಗೆ ಇತಿ ಹಾಡುವೇನು,
@Gara Srinivas

