Saturday, August 1, 2026
Homeಸಾಹಿತ್ಯI ಡಾಲಿ ಮಾತು ಜೋಳಿಗೆ ತೂತು I

I ಡಾಲಿ ಮಾತು ಜೋಳಿಗೆ ತೂತು I

ಬರೆಯುತ್ತಾರೆ ಗಾರಾ.ಶ್ರೀನಿವಾಸ್

I ಡಾಲಿ ಮಾತು ಜೋಳಿಗೆ ತೂತು I

ಚಿಂತನೆಗಳು ಚಿಂತನೆಗಳಷ್ಟೇ,
ಮಂತ್ರ ಮಾಂಗಲ್ಯ ತಾತ್ವಿಕವಾಗಿ ಒಪ್ಪಬೇಕಷ್ಟೆ,
ಕಡು ಬಡವರು ಬೆಳಿಬೇಕಷ್ಟೆ..?
ನಂತರದಿ ಬಡವರು ಬೇಡವಷ್ಟೆ..!

ಹಟ್ಟಿಯಲ್ಲಿರೋ ಮನಸುಗಳೇಕೆ..?!
ಆ ಜಗಲಿಗಳ ಕುರಿತು ಮಾತಾಡಬೇಕಷ್ಟೆ,
ಪ್ರಗತಿಪರತೆಯ ಹಾದಿಯಲ್ಲಿರಬೇಕಷ್ಟೆ,
ಉನ್ನತದೊಂದಿಗೆ ಸಾಂಗತ್ಯ ಬಯಸಬೇಕಷ್ಟೆ,

ಇದೇನು ಮದುವೆಯ ಕರೆಯೋಲೆ,
ಮಂತ್ರಿಗಳು, ಆಡಳಿತ ಷಾಹಿಗಳು, ಸಿರಿವಂತರು,
ಸೆಲೆಬ್ರಿಟಿಗಳು, ಹೈ ಪ್ರೋಫೈಲ್ ನೆರಳುಗಳು,
ಕ್ರಿಮಿನಲ್ಗಳು, ದುಷ್ಟರು ದುಮ್ಮಾನರು,

ಈ ನಡುವೆ ಸಾಮಾನ್ಯರು ಕಾಣಲಿಲ್ಲವಷ್ಟೆ,

ವಿಚಾರಗಳು ಆಚಾರದಲ್ಲಿರಬೇಕೇ..?!
ಖಾಲಿ ಮೈಕುಗಳಲಿ ಪ್ರತಿಧ್ವನಿಸಬೇಕಷ್ಟೆ,
ವೀಡಿಯೋ ರೀಲ್ಸ್ ಗಳಲಿ ದರ್ಶಿಸಬೇಕಷ್ಡೆ,
ಅಂದಿನ ಅಲ್ಲಮ, ಇಂದಿನ ಡಾಲಿ,
ಪ್ರಗತಿಪರರ ಜಗಲಿಗಳಲಿ ಅವನದೇ ಲಾಲಿ,
ಬೆಳೆದಿದ್ದಾಗಿದೆ, ಮತ್ತದೇ ಸಿರಿ ಮುಳ್ಳುಗಳ ಜಾಲಿ,

ಊರ ಬಾಗಿಲಿಗೆ ತೋರಣ, ಬಡತನವಿಲ್ಲದ ಕಾರಣ,
ವೈಚಾರಿಕತೆ ಎನ್ನುವ ಕ್ಲಿಷ್ಟಕರತೆಗಳಿಲ್ಲ,
ಮಾದರಿಯಾಗದ ಸಂಭ್ರಮಗಳು ಇವೆಲ್ಲಾ,
ಶುಭವಾಗಲಿ ಧ್ವಿಮುಖ, “ಮುಖ”ಧಾರಿ ನೀತಿಗೆ..
ಒಳಿತಾಗಲಿ ನವ ದಾಂಪತ್ಯದ ದಿನಮಾನಕೆ,

ಸೈಲೆಂಟ್ ಸುನೀಲ ಬಂದು ಹಾರೈಸಿದ ಎನ್ನುವ ಕಾರಣವಲ್ಲ, ಈ ಹೊತ್ತಿನ ಮಾಧ್ಯಮಿ ಮನಸುಗಳಿಗೆ, ಇದೇ ಡಾಲಿ ಧನಂಜಯನಿಗೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿರುವ ಜರೂರತ್ತಿದೆ.. ಇವರಾದ್ದಾದರೆ ಅದು ಸರಿ, ಅವರದ್ದಾದರೆ ಅದು ಅಕ್ಷರಶಃ ತಪ್ಪು ಎನ್ನುವ ಮಾನಸೀಕ ಹುಂಬರ ನಡುವೆ ಅವರೇ ಕಟ್ಟಿಕೊಂಡ ವಿಚಾರಧಾರೆಗಳು ನರಳುತ್ತಿದೆ ಎನ್ನುವುದನ್ನು ಇಲ್ಲಿ ದರ್ಶಿಸಿಕೊಳ್ಳಬಹುದು,

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I I ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕಿ ಶಾರದಾ ಪೂರ್ಯನಾಯ್ಕ್ I ಬರ ಪರಿಸ್ಥಿತಿ ಪರಿಶೀಲನೆ I  I ತಮಿಳುನಾಡಿಗೆ ಕಾವೇರಿ ನದಿ ನೀರು‌ I ಹರಿಸುವ ಆದೇಶ ಅವೈಜ್ಞಾನಿಕ ಹಾಗೂ ರೈತ ವಿರೋದಿಯಾಗಿದೆ I ಕರವೇ ಕಿರಣ್ I I ಪಶುವೈದ್ಯಾಧಿಕಾರಿಗಳ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿಗೆ ತಾತ್ಕಾಲಿಕ ತಡೆ ಹಾಗೂ ಆಂತರಿಕ ತನಿಖಾ ಉಪಸಮಿತಿ ರಚನೆ I I ಮತದಾರರ ಪಟ್ಟಿಯ ಶುದ್ದಿ ಕಾರ್ಯದಲ್ಲಿ ಸರ್ವರೂ ಪಾಲ್ಗೊಳ್ಳಬೇಕು I ಮತದಾರರ ನೋಂದಣಾಧಿಕಾರಿ ರಂಗಸ್ವಾಮಿ I