I ಭಗವಾನ್ ಮಹಾವೀರರ 2625ನೇ ಜಯಂತೋತ್ಸವ I ಭಾಗಿಯಾದ ಶಾಸಕ ಚೆನ್ನಬಸಪ್ಪ I
ಶಿವಮೊಗ್ಗ : ಅಹಿಂಸೆ, ಕ್ಷಮೆ ಮತ್ತು ಪರಧರ್ಮ ಸಹಿಷ್ಣುತೆಯ ಮಹಾನ್ ಸಂದೇಶವನ್ನು ಜಗತ್ತಿಗೆ ಸಾರಿದ ತೀರ್ಥಂಕರ ಭಗವಾನ್ ಮಹಾವೀರರ 2625ನೇ ಜಯಂತೋತ್ಸವದ ಪವಿತ್ರ ಸಂದರ್ಭದಲ್ಲಿ, ಇಂದು ಶಿವಮೊಗ್ಗದ ಬಸವೇಶ್ವರ ನಗರದ ದಿಗಂಬರ ಜೈನ್ ಸಂಘದ ಶ್ರೀ ಆದಿನಾಥ ಜಿನ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶೇಷ ಪೂಜಾ ಕೈಂಕರ್ಯ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತಿಪೂರ್ವಕವಾಗಿ ಶಾಸಕ ಚೆನ್ನಬಸಪ್ಪನವರು ಪಾಲ್ಗೊಂಡರು
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಬಲ್ಕೀಶ್ ಬಾನು, ದಿಗಂಬರ ಜೈನ ಸಂಘದ ಅಧ್ಯಕ್ಷರಾದ ಜಯರಾಜ ಬಿ ಪಾಂಡಿ, ಜೈನ್ ಸಮಾಜದ ಪದಾಧಿಕಾರಿಗಳು ಉಪಸ್ಥಿತರಿದ್ದರು.


