Monday, August 3, 2026
Homeಸಾಹಿತ್ಯಅನುರಣನ.!

ಅನುರಣನ.!

“ಇದು ಕಳೆದು ಹೋಗುವವರ ಸುಂದರ ಕನವರಿಕೆಯ ಕವಿತೆ. ಕುಂತಲ್ಲೆ ನಿಂತಲ್ಲೆ ಮಾಯವಾಗುವ ಜೀವದ ಸಂವೇದನೆಗಳ ಮಧುರ ಭಾವಗೀತೆ. ಆದರೆ ಎದೆಯ ಅನುರಣಿಸುವ ಅನುರಾಗದ ಹಕ್ಕಿಯ ರಿಂಗಣಗಳ ಸ್ವರಗೀತೆಯಿದು. ಒಲವರಾಗಕೆ ಲಯ ತಪ್ಪುವ ಹೃದಯಮೃಂದಗದ ತಾಳಗಳ ತಲ್ಲಣಗಳ ಚಿರಗೀತೆಯಿದು.? ಪ್ರೆಮಗಾರುಡಿಗೆ ಪರವಶವಾಗುವ ಜೀವ-ಭಾವಗಳ ಯುಗಯುಗದ ಜಗದ ನಿತ್ಯಸತ್ಯ ಅಮರಗೀತೆಯಿದು. ಏನಂತೀರಾ ..?” – ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.

ಅನುರಣನ.!

ಗೆಳೆಯ ಬಾಯಿಬಿಗಿದು
ಮಾತುಗಳ ತಡೆದು
ಮೂಕವಾಗಬಲ್ಲೆ.!
ಬೋರ್ಗರೆವ ಭಾವವ
ತಡೆಯಲು ಒಡಲಿಗೆ
ತುಟಿಗಳಿಲ್ಲವಲ್ಲೋ.!

ಕಂಬನಿ ತಡೆಹಿಡಿದು
ಕಂಗಳ ಗಟ್ಟಿಮುಚ್ಚಿ
ಮಲಗಲೂಬಲ್ಲೆ.!
ಕಾಡುವ ಕನಸುಗಳ
ಮುಚ್ಚಲು ಒಳಗಣ್ಣಿಗೆ
ರೆಪ್ಪೆಗಳಿಲ್ಲವಲ್ಲೋ.!

ನಿನ್ನ ಸಂಧಿಸದಂತೆ
ತನುವ ಬಂಧಿಸಿ
ನಿಲ್ಲಿಸಲೂಬಲ್ಲೆ.!
ಸ್ಮರಿಸಿ ಸ್ಪಂದಿಸದಂತೆ
ಹಿಡಿಯಲು ಎದೆಗೆ
ಬಾಹುಗಳಿಲ್ಲವಲ್ಲೋ.!

ಮನೆಬಾಗಿಲು ಮುಚ್ಚಿ
ಬರಡು ಬಂಡೆಯಾಗಿ
ಒಂಟಿ ಕೂರಬಲ್ಲೆ.!
ನಿನ್ನತ್ತ ಹೋಗದಂತೆ
ಮನಕೆ ಬೀಗಜಡಿಯಲು
ಚಿತ್ತಕ್ಕೆ ಚಿಲುಕವಿಲ್ಲವಲ್ಲೋ.!

ಉಸುರುಸಿರಲು ನಿನ್ನಯ
ಹೆಸರ ಬರೆವ ಹೃದಯಕೆ
ಕಡಿವಾಣವಿಲ್ಲವಲ್ಲೋ.!
ಕ್ಷಣಕ್ಷಣವೂ ನಿನ್ನರಸುತ
ಕಳೆದು ಹೋಗುವ ಜೀವವ
ಕಟ್ಟಿಹಾಕಲಾಗುತ್ತಿಲ್ಲವಲ್ಲೋ.!

-ಎ.ಎನ್.ರಮೇಶ್. ಗುಬ್ಬಿ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ತೀರ್ಥಹಳ್ಳಿಯಲ್ಲಿ ಮಳೆಯ ಅಬ್ಬರ I ಗುಡ್ಡ ಕುಸಿದು ಮೂವರ ಧಾರುಣ ದುರ್ಮರಣ I I ಗಾರಾ ಎನ್ನುವ ಜೀವಭಾವ I I ಕರೋನಾ ಲಾಕ್‌ಡೌನ್ ಅವಧಿಯ ಭೂ ಒತ್ತುವರಿ ಹಾಗೂ ಅಕ್ರಮ ಮ್ಯೂಟೇಷನ್ I ಕುರಿತು ಉನ್ನತ ಮಟ್ಟದ ತನಿಖೆಗೆ ಹ್ಯೂಮನ್ ರೈಟ್ಸ್... I ಗೋಪಾಳದ ಆದಿ ರಂಗನಾಥ ಸ್ವಾಮಿ ದೇವಳದ I ಜಾಗದ ಮೇಲೆ ಲ್ಯಾಂಡ್ ಪೋರ್ಜರಿಸ್ಟ್ ಗಳ ದಾಳಿ I ಅಧಿಕಾರಿಗಳ ಅತೀವ ಮೌನ I I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I