ಬರೆಯುತ್ತಾರೆ ಗಾರಾ.ಶ್ರೀನಿವಾಸ್
I ಕಾಗೇರಿ ಯಾರು..?! I
ಕಾಗೇರಿಗೇಕೆ ದೌಡಾತು ಕೆಟ್ಟ ಬುದ್ದಿ,
ದೇಶದ ರಾಷ್ಟ್ರಗೀತೆಯು ಬಿಡ್ಲಿಲಲ್ಲ,
ಅದೊಂದು ಬ್ರಿಟಿಷರ ಸ್ವಾಗತದ ಸಾಲೆಂದ,
ಬುದ್ದಿ ಭ್ರಮಣೆಯ ಧಾವಂತವೇ,
ತಲಿ ಚರಿಗ್ಯಾಗ ಲದ್ದಿ ತುಳಕ್ಯಾತ..?!
ಹೇ.. ವಿ, ಕಾಗೇರಿ ನೀ ಬೊಗಳಿದ್ದೇನು,
ನಿನ್ಮೇಲೆ ಇನ್ನೂ ಸುಮೋಟೋ ಕೇಸಿಲ್ಲವೇ,
ನೀನೇನು..?! ಅನ್ಯ ದೇಶದವ್ರೋ..? ಭಾರತದವ್ರೋ..?!
ವ್ಯಕ್ತಿ, ಅಭಿವ್ಯಕ್ತಿಗಳ ಹತ್ಯೆಗೈದು ಬಿಟ್ಯಲ್ಲ,
ಜನಗಣಮನದೊಳು ಜೀವನದಿಗಳಿಲ್ಲವೇ,
ಶ್ರೀ ಸಾಮಾನ್ಯನ ಅಧಿನಾಯಕತ್ವ ಬಣ್ಣಿಸಿಲ್ಲವೇ,
ಭಾರತದ ಭಾಗ್ಯವಿಧಾತನನ್ನು ಸ್ಮರಿಸಿಲ್ಲವೇ,
ಜನ ಜಾಗೃತದ ಜಾಗಟೆಗಳ ಸದ್ದಿಲ್ಲವೇ..?!
ದ್ರಾವಿಡರ ಕುರಿತಾಗಿ ಉಲ್ಲೇಖವಿರುವ ಉರಿಯೇ,
ಬಂಗಾಳಿ ಕವಿಯ ಸಾಮರಸ್ಯಕ್ಕಿಟ್ಟ ಸುಡುಬೆಂಕಿಯೇ,
ನಿತ್ಯವೂ ಗೆಲುವುಗಳ ಉವಾಚ ಇರಬಾರದೆ..?!
ಅಯ್ಯೋ ಕಾಗೇರಿ ನೀನ್ಯಾರು..?
ಕಾಗೇರಿ ವಿರುದ್ದ ಸುಮೋಟೋ ಕೇಸು ದಾಖಲಿಸಿ,
ರಾಷ್ಟ್ರಗೀತೆಯ ಅಪಮಾನಿಸಿದವನ ಸೊಕ್ಕಡಗಿಸಿ,
ಇಂದು ಈತನು, ನಾಳೆ ಇನ್ನೋರ್ವನು,
ಗೀತೆಯ ಒಪ್ಪಿಕೊಂಡಿದ್ದೇವೆ, ಅಭಿಮಾನಿಸಿದ್ದೇವೆ,
ಎದೆಯ ಸ್ವಾಭಿಮಾನದಿ ಧ್ವನಿಸುತ್ತೇವೆ,

