I ಟಿ ಅಂಗಡಿ ಹುಡುಗನ ಮೇಲೆ I ಪೊಲೀಸಪ್ಪ ರಾಕೇಶನ ದೌರ್ಜನ್ಯ I
ಬೆಂಗಳೂರು : ದೇವನಹಳ್ಳಿಯ ಕನ್ನಮಂಗಲ ಗ್ರಾಮದ ಓಝೋನ್ ಗೇಟ್ ಬಳಿ ಚಹಾ ಅಂಗಡಿಯನ್ನು ರಾತ್ರಿ ಹೊತ್ತು ಮಡುಗಟ್ಟುವವರೆಗೂ ತೆರೆದಿದ್ದ ಎನ್ನುವ ಕಾರಣಕ್ಕಾಗಿ ಇಲ್ಲಿನ ಸ್ಥಳೀಯ ಇನ್ಸ್ ಪೆಕ್ಟರ್ ರಾಕೇಶ್ ಮನಬಂದಂತೆ ಥಳಿಸಿದ್ದಲ್ಲದೆ, ಅಂಗಡಿಯನ್ನು ಧ್ವಂಸ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ,
ಇದೀಗ ಎಲ್ಲೆಡೆ ವೈರಲ್ ಆಗಿದ್ದು, ಬಡತನದ ಬೇಗೆಯಲಿ ಬದುಕು ಕಟ್ಟಿಕೊಂಡು ಚಹಾ ಮಾರುವ ಕೆಲಸ ಮಾಡುವುದು ಅದ್ಯಾಗೆ ಅಪರಾಧ ಎನ್ನುವುದು ಉನ್ನತಮಟ್ಟದ ಪೊಲೀಸರೇ ಉತ್ತರಿಸಬೇಕಾಗಿದೆ, ಇನ್ನೂ ಇದೇ ಏರಿಯಾದ ಸುತ್ತಮುತ್ತಲಿನ ರೆಸಾರ್ಟ್ ಗಳು ಭಾರಿ ಬಂಡವಾಳ ಹೂಡಿರುವ ಹೋಟೆಲ್ ಗಳನ್ನು ಇದೇ ರೀತಿ ಮನಬಂದಂತೆ ಥಳಿಸಿ ಬಾಗಿಲು ಹಾಕಿಸುತ್ತಾನೆಯೇ..?! ಎನ್ನುವುದು ಮನವರಿಕೆ ಮಾಡಿಕೊಂಡು ಸಮಾ ಪಾನಮತ್ತನಾಗಿಯೇ ವಿವೇಕ ಕಳೆದುಕೊಂಡು ದುರ್ವರ್ತನೆಗಿಳಿದ ಇನ್ಸ್ ಪೆಕ್ಟರ್ ರಾಕೇಶ್ ನನ್ನು ಕೂಡಲೇ ಅಮಾನತ್ತುಗೊಳಿಸಲು ಉನ್ನತಮಟ್ಟದ ಪೊಲೀಸ್ ಅಧಿಕಾರಿಗಳು ಮುಂದಾಗಲಿ

