Saturday, August 1, 2026
Homeಸಾಹಿತ್ಯI ಯುದ್ಧವೆನ್ನುತ್ತಾರೆ I

I ಯುದ್ಧವೆನ್ನುತ್ತಾರೆ I

I ಯುದ್ಧವೆನ್ನುತ್ತಾರೆ I

ಅವರು ಯುದ್ಧವೆನ್ನುತ್ತಾರೆ
ಮಡುಗಟ್ಟಿದ ರಕ್ತದ ಕಲೆಗಳನ್ನು,
ಮುಗ್ಧ ಜನರ ನೋವಿನ ಕೂಗನ್ನು
ಅನಾಥ ಮಕ್ಕಳ ಕಣ್ಣೀರನ್ನು,
ಸೂರಿಲ್ಲದ ನಿರಾಶ್ರಿತರ ಗೋಳನ್ನು
ಮಾನವೀಯತೆ ಮರೆತ ಮನುಷ್ಯನ ಕೃತ್ಯಕ್ಕೆ
ಯುದ್ಧವೆನ್ನುವರು ಅವರು,

ಪ್ರೀತಿಯ ಉಸಿರ ಕಟ್ಟಿಸಿ
ದ್ವೇಷದ ಹೊಗೆಯ ಹಾಕುವರು,
ಅರಳುವ ಹೂಗಳ ಬಾಡಿಸಿ
ತರತರದಿ ಕಾಡಿಸುವರು,
ಅಸಹಾಯಕತೆ, ಕಣ್ಣೀರು ರಾಜ್ಯವಾಳುವಾಗ
ಅದಾವ ವ್ಯವಸ್ಥೆ ಗೆಲ್ಲುವುದೋ,
ಅದಾರ ಹೊಟ್ಟೆಗೆ ತಂಪೆರೆವುದೊ,

ಕಣ್ಣೆದುರಲಿ ಕಾಡುವ ಬದುಕು
ಪ್ರಶ್ನೆಯಾಗಿಯೇ ಉಳಿವ ಭವಿಷ್ಯ,
ರಕ್ತದ ಹಾದಿಯಲಿ ನಡೆದು
ಕೆಂಪಾದ ಅಂಗಾಲಿಗೆ,
ಅದೆಂತು ಹಾಸುವುದೋ ಹೂವನ್ನು
ಮುರುಟಿದ ಭರವಸೆಗಳ ಬೇರನು,
ಚಿಗುರಿಸಬಲ್ಲದು ಪ್ರೀತಿಯ ನೀರೊಂದೇ,

-ರಶ್ಮಿ ಶಮಂತ್  ಹೊಸನಗರ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I I ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕಿ ಶಾರದಾ ಪೂರ್ಯನಾಯ್ಕ್ I ಬರ ಪರಿಸ್ಥಿತಿ ಪರಿಶೀಲನೆ I  I ತಮಿಳುನಾಡಿಗೆ ಕಾವೇರಿ ನದಿ ನೀರು‌ I ಹರಿಸುವ ಆದೇಶ ಅವೈಜ್ಞಾನಿಕ ಹಾಗೂ ರೈತ ವಿರೋದಿಯಾಗಿದೆ I ಕರವೇ ಕಿರಣ್ I I ಪಶುವೈದ್ಯಾಧಿಕಾರಿಗಳ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿಗೆ ತಾತ್ಕಾಲಿಕ ತಡೆ ಹಾಗೂ ಆಂತರಿಕ ತನಿಖಾ ಉಪಸಮಿತಿ ರಚನೆ I I ಮತದಾರರ ಪಟ್ಟಿಯ ಶುದ್ದಿ ಕಾರ್ಯದಲ್ಲಿ ಸರ್ವರೂ ಪಾಲ್ಗೊಳ್ಳಬೇಕು I ಮತದಾರರ ನೋಂದಣಾಧಿಕಾರಿ ರಂಗಸ್ವಾಮಿ I