Saturday, August 1, 2026
Homeಸಾಹಿತ್ಯ I ಹಣದ ಮರ I

 I ಹಣದ ಮರ I

 I ಹಣದ ಮರ I

ಹಣ್ಣಿಲ್ಲ , ಕಾಯಿಲ್ಲ
ಹೂವಿನ ಘಮಲಿಲ್ಲ
ಕಾಸಿನ ತೂಕದಿ
ಜಣ – ಜಣ ಮರವೆಲ್ಲಾ .

ಹಣದ ಮರವೊಂದಿದ್ದರೆ
ಮರಗಳೇ ಜಗವಾಗುತ್ತಿತ್ತು
ಕಾಯುವಿಕೆ ಗಳಿಕೆಯ ಭರದಲಿ
ಭಾವದ ಬದುಕು ಬತ್ತುತ್ತಿತ್ತು .

ಕಾದು ಕೂರುವ ಬಕಪಕ್ಷಿಯಾಗಿ
ಮರವ ಅಲ್ಲಾಡಿಸಿ ನೋಟಿಗಾಗಿ
ಮರವ ತಬ್ಬಿ ಮನುಕುಲವೆಲ್ಲಾ
ಕೊಡಲಿ ಏಟು ಮರಕ್ಕಿಲ್ಲ .

ಕಾಸಿನ ನೋಟುಗಳು ತೂಗುತಿವೆ
ರೆಂಬೆ ಕೊಂಬೆಗೂ ಕಾವಲಿವೆ
ಹಸಿರಿನ ಮರೆಯಲಿ ಕಾಸಿದೆ
ಮರದೊಂದಿಗಾಗ ಪ್ರೀತಿಯಿದೆ .

ಹಣದ ಮೋಹದಿ ಜಗ ಆಗ
ಉಸಿರ ಹಸಿರಿಗೆ ಬೆಲೆ ಈಗ
ಜೊಳ್ಳು ಜೀವನ ಮಳ್ಳತನದಿ
ಬಾಂಧವ್ಯ ನರಿಯದೆ ಜಗಳ ದೊಂಬಿ .

ಆಸೆಯ ಬದುಕು
ಹಣದಗಳಿಕೆಯಲೇ ಕಳೆದೋಯ್ತು
ನೋಟಿನ ಮೋಹದಿ
ಹಸಿರು ಚಿರವಾಯ್ತು .

-ಬಿಂದು ಜೆ.ಕೆ, ಚನ್ನಾಪುರ

RELATED ARTICLES

1 COMMENT

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I I ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕಿ ಶಾರದಾ ಪೂರ್ಯನಾಯ್ಕ್ I ಬರ ಪರಿಸ್ಥಿತಿ ಪರಿಶೀಲನೆ I  I ತಮಿಳುನಾಡಿಗೆ ಕಾವೇರಿ ನದಿ ನೀರು‌ I ಹರಿಸುವ ಆದೇಶ ಅವೈಜ್ಞಾನಿಕ ಹಾಗೂ ರೈತ ವಿರೋದಿಯಾಗಿದೆ I ಕರವೇ ಕಿರಣ್ I I ಪಶುವೈದ್ಯಾಧಿಕಾರಿಗಳ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿಗೆ ತಾತ್ಕಾಲಿಕ ತಡೆ ಹಾಗೂ ಆಂತರಿಕ ತನಿಖಾ ಉಪಸಮಿತಿ ರಚನೆ I I ಮತದಾರರ ಪಟ್ಟಿಯ ಶುದ್ದಿ ಕಾರ್ಯದಲ್ಲಿ ಸರ್ವರೂ ಪಾಲ್ಗೊಳ್ಳಬೇಕು I ಮತದಾರರ ನೋಂದಣಾಧಿಕಾರಿ ರಂಗಸ್ವಾಮಿ I