Sunday, August 2, 2026
Homeಸಾಹಿತ್ಯI ಕನಸ ಮುಗಿಸದ ಮನಸು..I

I ಕನಸ ಮುಗಿಸದ ಮನಸು..I

ಬರೆಯುತ್ತಾರೆ ಗಾರಾ.ಶ್ರೀನಿವಾಸ್

I ಕನಸ ಮುಗಿಸದ ಮನಸು..I

ನಡು ರಾತ್ರಿ,
ನಡ ನಾಟ್ಯವಿಕ್ಕಿದೆ,
ಕನಸ ಹೊದ್ದು ಮನಸುಗಳು
ಬೆಸುಗೆಗಳ ಹೊಸೆದಿದೆ,
ಲೋಕದ ಅವಲೋಕನದಲಿ
ಕಾನನಗಳು ಲಗ್ಗೆಯಿಟ್ಟಿದೆ,

ಅಲ್ಲೊಂದು ಬಳ್ಳಿಯಂತೆ ಸುತ್ತಿಕೊಂಡ
ಕಾಯಗಳ ಸಾಂಗತ್ಯ…!
ಆಂತರ್ಯದ ಮಧುರ ಮದಿರೆಗಳಲಿ
ಬೆರೆತು ರಸಗಳ ಸವಿದ ಸ್ವಾದನೆಗಳ ಹಜಾರ,

ಹಸಿರ ಹೊನಲು, ಸಂಗೀತಧಾರೆಗಳ ಕೊಳಲು,
ಮಿಂಚಿ ಮರೆಯಾಗುವ ಇರುಳ ಬೆಳಕು,
ಅವಳ ಪಾದಗೆಜ್ಜೆಗಳ ಸದ್ದು, ಪಿಸುದನಿಗಳ ಮದ್ದು,
ಹಿಡಿದಿಟ್ಟ ಭಾವಗಳ ಚಿಟ್ಟೆಗಳನು

ಒಂದೊಂದೆ ಹಾರಿ ಬಿಡುವ ಮೋಹಕ ಕ್ಷಣಗಳ ಹೊತ್ತು,
ಕನಸ ಮುಗಿಸದ ಮನಸದು,
ಮಾಸದ ಚಿತ್ರಗಳಿನ್ನೂ ಸುಳಿದು ನಲಿಯುತ್ತಿದೆ,
ಎದೆ ವೀಣೆಗಳ ನುಡಿಸಿದ ಕನಸದು,

ಯಾವ ಸುರದ್ರೂಪಿ, ಸುರಾಂಗನೆಯ ಬಿಂಬವೋ..?
ಕಾಯದ ಗಾಯ ಮಾಸಿದ ದವಾಖಾನೆಯದು,
ಕನಸೇ ಕನ್ನಡಿಯಾಗಿ ಹುಡುಕಾಡುತ್ತಿದೆ,

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ತೀರ್ಥಹಳ್ಳಿಯಲ್ಲಿ ಮಳೆಯ ಅಬ್ಬರ I ಗುಡ್ಡ ಕುಸಿದು ಮೂವರ ಧಾರುಣ ದುರ್ಮರಣ I I ಗಾರಾ ಎನ್ನುವ ಜೀವಭಾವ I I ಕರೋನಾ ಲಾಕ್‌ಡೌನ್ ಅವಧಿಯ ಭೂ ಒತ್ತುವರಿ ಹಾಗೂ ಅಕ್ರಮ ಮ್ಯೂಟೇಷನ್ I ಕುರಿತು ಉನ್ನತ ಮಟ್ಟದ ತನಿಖೆಗೆ ಹ್ಯೂಮನ್ ರೈಟ್ಸ್... I ಗೋಪಾಳದ ಆದಿ ರಂಗನಾಥ ಸ್ವಾಮಿ ದೇವಳದ I ಜಾಗದ ಮೇಲೆ ಲ್ಯಾಂಡ್ ಪೋರ್ಜರಿಸ್ಟ್ ಗಳ ದಾಳಿ I ಅಧಿಕಾರಿಗಳ ಅತೀವ ಮೌನ I I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I